I
ಹಲವಾರು ಬಾರಿ
ಮನೆತೊರೆದಿದ್ದೇನೆ,
ಮನ ಕೇಳದೆ
ಹಿಂತಿರುಗಿದ್ದೇನೆ?
ನಾನಲ್ಲ ರಾಜ,
ನನಗಿರಲಿಲ್ಲ
ಮಡದಿ ಪುತ್ರ ರಾಜ್ಯ
ಅರ್ಜಿತಾಲರ್ಜಿ ಆಸ್ತಿ
ಆದರೂ
ಹರಿಯಲಾಗದ
ವ್ಯಾಮೋಹ
ಮಾತೃ ಬಂಧ
ನಾ ಕೇವಲ
ಸಂಸಾರಕ್ಕೆ ಬದ್ಧ
ಹಗಲು ರಾತ್ರಿಯ ಕಾಯ್ದು
ರಾತ್ರಿ ಹಗಲನು ಕಾಯ್ದು
ಮೌನದ ಕಫನ್ ಸೇರಲು
ಸಿದ್ಧ
ಅದಕ್ಕೆ
ಅದಕ್ಕೇ
ನಾನಗಲಿಲ್ಲ ಬುದ್ಧ
-ದೀಪಕ್
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ