ಶುಕ್ರವಾರ, ಜೂನ್ 10, 2016

ಅನಿಸಿದ್ದು

ನಿರ್ದಿಷ್ಟ ಗುರಿಯಿಲ್ಲ
ಸಾಧನೆಯ ಹಠ ವಿಲ್ಲ
ಬದುಕಿಗೆ ಉದ್ದೇಶವಿಲ್ಲ
ನೀಲಿನಕ್ಷೆಗಳ ಗೊಂಚಲು
ಆದರೆ ಸಾಧನೆ ;
ಶೂನ್ಯ
ಆಸೆ ಆಕಾಂಕ್ಷೆಗಳು ನೂರಾರು
ಬದುಕಿಗೆ ದಿಕ್ಕಿಲ್ಲ ಹಲವರಿಗೆ
ದಿಕ್ಕಿಗೆ ಬದುಕಿಲ್ಲ ಕೇವಲರಿಗೆ
ತತ್ವ ಮೀಮಾಂಸೆ
ತರ್ಕ ಬದ್ಧತೆಗಳಗೂಡು
ಮಳೆಬಂದರೆ ಸೋರುವ ಮಾಡು
ಆದರೂ ನಿಲ್ಲದು ಈ ಅಸಂಬದ್ಧ ಹಾಡು
ಇದು ಒಂದು ಬದುಕಿನ ಪರಿ
ದಿಕ್ಕು ದೆಸೆ ಗುರಿ ಉದ್ದೇಶಗಳಿಲ್ಲ
ಉಂಡು ಮಲಗೇಳುವುದು
ಉಸಿರು ನಿಲ್ಲುವತನಕ
ಸಾವಿಗೆ ಮೊದಲೇ ಸಮಾಧಿಯ ಚಿಂತೆ
ಸುತ್ತಸೇರುವ ಮಂದಿಗಳ ಎಣಿಕೆ
ಬೇಡದ ಪಾಡು
ಇದು ಬದುಕಿನ ಕಾಡು
ಮಲಗಿದರೆ ನಿದ್ರೆಯ ಚಿಂತೆ
ಎದ್ದರೆ ಉಂಡುಡುವ ಚಿಂತೆ
ಉಟ್ಟ ಮೇಲೆ ಧನಕನಕದ ಚಿಂತೆ
ನಂತರ
ದಾಯಾದಿ ಹೊಂಚು
ಅದಮುರಿಯಲೊಂದು ಸಂಚು
ಅಲೆದಾಟ ಪರದಾಟ
ಉಂಡ ಹಿಡಿಯನ್ನವ ಮೀರಿ ದಕ್ಕಿದ್ದೆನಗೇನು ಇಲ್ಲ
ಆದರೂ ಅಂತಸ್ತುಗಳ
ಬಂಧಕೇನು
ಕೊರತೆಗಳಿಲ್ಲ
ಪ್ರತಿಷ್ಠೆ ಒಣ ನಿಷ್ಠೆಗಳ
ದೊಂಬರಾಟ,
ಉದ್ದೇಶ ತನಗೆ ಅಸ್ಪಷ್ಟ
ಆದರೂ ಬದುಕು ನೀಗದ ಕಷ್ಟ

ಸಂತಸವಿಲ್ಲಿ ಮರೀಚಿಕೆಯ ಸುಂದರಿ,
ಬಾಗಿಲಿಗೆ ಬಂದದ್ದು ಒಳಗೆ ಬಾರದು ಎಲ್ಲು.
ಕೈ ಬೀಸಿ ಕರೆಯುವುದು ಬಾ ಹೊರಗೆ ಅಪ್ಪು ನೀನನ್ನ ,
ನಾ ಹೇಳಿದೆ
"ಹೀಗೆ ಮಾಡಿದರೆ ಯಾರು ಒಪ್ಪರು ನಿನ್ನ" 
ಜೀವ ಮುಗಿಯದಾ ದ್ರೌಪದಿ ಸೀರೆ
ಗೋಪಾಲ ಹಸ್ತ
ಅಸ್ತಮಾನದ ನಂತರ
ಎಲ್ಲ ಬೆತ್ತಲೆ ಕತ್ತಲೆ
ಜ್ಞಾನ ದೀವಿಗೆ ಹುಚ್ಚಲ್ಲೆ
ಎಲ್ಲ ಮಂಗಮಾಯ
ಉಳಿದದ್ದು ಶೂನ್ಯ
ದೊಡ್ಡ ಶೂನ್ಯ 
ಸಣ್ಣ ಶೂನ್ಯ ಗ್ರಹಿಕೆಯದ್ದು
"ಶೂನ್ಯ"ಗ್ರಹಿಕೆ ಆಚೆಯದ್ದು.
Deepak

ಶನಿವಾರ, ಜೂನ್ 4, 2016

ನಿನ್ನ ನೆನಪು

ಸಮಯ ಹಳಸಿತ್ತು
ಹೃದಯ ಒಡೆದಿತ್ತು
ಒಡಲು ತುಂಬಿತ್ತು
------

ನಿನ್ನ ನೆನಪುಹೊತ್ತಾಗ
ಹೃದಯವೆಲ್ಲ ಬೆಳಗಿ
ಜೀವ ಮಣ್ಣಾಯಿತು
----------
*ದೀಪಕ್

ಮಂಗಳವಾರ, ಮೇ 31, 2016

ದ್ವಂದ್ವ

ಮಾತು ಮುಗಿದ ನಂತರ
ಕಳೆದುಕೊಂಡ
ಅನುಭವ
ಕಾಲವಾದವೆಷ್ಟೊ ಬಂಧಗಳು
ಅನಂತದಲ್ಲಿ
ಸ್ವಂತಕೆಂದು ಕೊಂಡಿ ಬಿಚ್ಚಿದಾಗ ಸದ್ದೂ
ಸಡ್ಡು ಹೂಡೆದು
ಆಂತರ್ಯವ ಹಂಗಿಸುತ್ತದೆ;
"ನೀನೊಬ್ಬ ಸೋಗಿನ ಸ್ವಾರ್ಥಿ"

ನನ್ನೊಳಗಿನ್ನೊಬ್ಬನಿಗೆ ಸುಮ್ಮನಿರಲು
ಹೇಳಿದಷ್ಟು ಕಿರಿಕಿರಿ,
ಹುಚ್ಚಾಲೋಚನೆಗಳ ಹಿಂದೆ
ಓಡಿದರೆ  ಆತ್ಮಹತ್ಯೆ ಖಾತರಿ
ಕೇಳದಿರೆ
ಆತ್ಮದ ಸಾವು !

ದೀಪಕ್

ಭಾನುವಾರ, ಮೇ 29, 2016

ಮತ್ತೆ ಮರೆಯಬೇಕಿದೆ

ಅಟ್ಟ ದಿಂದ ಕೆಳಗಿಳಿಸಿದ
ನೆನಪುಗಳ ಮೂಟೆಯ
ಮತ್ತೆ
ಮತ್ತೆ ಮೇಲೊಟ್ಟಬೆಕಿದೆ

ನೆನಪಿನಂಗಳದಲ್ಲಿ ತಿರುಗಿ
ಬದುಕಿಸಿದ್ದವರನ್ನು
ಮತ್ತೆ
ಸಾಯಿಸಬೇಕಿದೆ

ಮರೆತ ಪುಟಗಳ
ಹಿಂತಿರುಗಿಸಿ ಓದಿದ್ದನ್ನು
ಮತ್ತೆ
ಮರೆಯಬೆಕಿದೆ

ಆಸರೆಯಾಗಿದ್ದ ತೋಳನ್ನು 
ತೊಯ್ಸಿ ಮಲಿನಿಸಿದ ತಪ್ಪಿಗೆ
ಮತ್ತೆ
ಎಲ್ಲ ಮರೆಯಬೆಕಿದೆ
ಮತ್ತೆ
ಎಲ್ಲ ಮರೆಯಬೆಕಿದೆ
ಈ ಪುಟ್ಟ ಹೃದಯ
ದೀಪಕ್

ಶನಿವಾರ, ಮೇ 28, 2016

ನಿನ್ನದೆ

ಜೀವಂತ ನಿದ್ರೆಗಳ
ಹಾರಿಸಿ
ಸತ್ತ ಕನಸುಗಳ
ಪುನಋಜ್ಜೀವಿಸಿ
ಸನಿಹವಿದ್ದವನನ್ನು
ತೊರೆದು
ಇನಿಯನೆದೆ
ಅಪ್ಪುವೆಯಾ?
ಸವಾಲುಗಳಿವೆ ಭರಪೂರ
ಉತ್ತರ ಹೆಣೆಯುವೆಯ
ಮೆತ್ತನೆ ನುಣುಚುವೆಯ

ಗುರುವಾರ, ಮೇ 26, 2016

ನೆನಪು

ಮೊನ್ನೆ ನೆನಪ
ಬುತ್ತಿಯ ಬಿಚ್ಚಿದೆ
ಹಂಚಿಕೊಳ್ಳಲು,
ಜೊತೆಗೆ
ತೂರಿಕೊಂಡವು
ಕೆಲ ತಾಜಾ ನೆನಪುಗಳು
ದೀಪಕ್

ಬುಧವಾರ, ಮೇ 25, 2016

ಶತ ಮಾನ

ಹೆದರೆದರಿಯೆ ಇಣುಕು
ನೋಟ
ಕದ, ಸಂದಿಗಳಲೆ ಜಗ,
ಅದ್ಭುತ!

ಸಂಕೊಲೆಗಳು
ಮತ್ತೆ...
ಬಿಗಿದು ಕೊಂದವು,
ಗೂಟದ
ಹಗ್ಗ ದೂರವಷ್ಟೆ
ಕ್ರಮಿಸಲವಕಾಶ
ನಂತರ ಪಾಶ!

ಮೂಕ ರೋಧನ ...
ಕೇಳುವವರೆಲ್ಲ
ಏನು ಬೇಕು...
ಬೆಳ್ಳಿ,ವಜ್ರ , ಬಂಗಾರ
ಪಚ್ಛೆ ಮುತ್ತು ರತ್ನ?
ಕೋ,
ವೈಭವಿಸು

ನೀಡುವುದಾದರೆ
ಒಮ್ಮೆ ಮನ ಬಿಚ್ಚಿ
ನಗಲು ಬಿಡಿ
ಬಂಗಾರ ಪಂಜರವ
ತೊರೆಯಬಿಡಿ,
ತೊರೆ ನೀರೆ ಸಾಕೆನಗೆ;
ಕಬಂಧಗಳು
ಹದ್ದು ಕಾವಲು
ಪ್ರಶ್ನೆಗಳ ಸುರಿಮಳೆ
ನನಗೆ ಬೇಡ
ಹಕ್ಕಿಯಂತೆ ಸ್ವಚ್ಚಂದ
ಚಿಲಿಪಿಲಿಸುತ
ಸುತ್ತಬೇಕೀ ಜಗವ
ಮೌನದ ಮಾತು
ಅರ್ಥವಾಯಿತೆ
ನಿಮಗೆ
ಶತ(ಮಾನ)ಗಳಿಂದ
ಕಾಪಿಟ್ಟ ಮಾನವಿದು!
*ದೀಪಕ್

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.