ಸೋಮವಾರ, ಏಪ್ರಿಲ್ 4, 2022

ಹೀಗೆ ಕುಳಿತಿದ್ದಾಗ

ಹೀಗೆ ಕುಳಿತಿದ್ದಾಗ...
ಎಲ್ಲಿ ಬತ್ತಿ ಹೋದವೋ ಈ ಬಿರುಬಿಸಿಲಿನಲ್ಲಿ,
ಪುಟಿಪುಟಿದು ಹುಟ್ಟುತ್ತಿದ್ದ ಭಾವನಕ್ಕರಗಳು ನೆಳಲಿನಾವಿಷ್ಕಾರದಲ್ಲಿ?

 ಇಲ್ಲಿ ಸೋಡಾಚೀಟಿಯನು ಕೊಟ್ಟು  ಹೋದದ್ಡೆಲ್ಲಿ,
 ಅಮ್ಮನ ಒಡಲಿನಲ್ಲಿ, ಕಂದನ ಮಿದುಳಿನಲ್ಲಿ, 
ಕರ್ತವ್ಯದಂಟಿನಲ್ಲಿ

ಎಲ್ಲರ ನಡುವಿದ್ದೂ ಒಬ್ಬಂಟಿ,
 ಕಾಡುವ ನೆನಪುಗಳು 
ಕಾವ್ಯವಾಗದೆ ಮುಷ್ಕರವ ಹೂಡಿವೆ ಜಂಟಿ;
ಇದು ವರವೋ ಶಾಪವೋ
 ಬಗೆಹರಿಸಬೇಕು ಕಾಲದ ತೋಟಿ 
ಕಾಲಕ್ಕೆ ಬಿಟ್ಟ ಎಷ್ಟೋ ನಿರ್ಧಾರಗಳು 
ಕಾಲವಾದವು,
  ಜಡ ಸಾಮ್ರಾಜ್ಯದೊಳು ಮುಳುಗಿ ಮಿಂದು ಉಸಿರುಗಟ್ಟಿದವು

ಝಾಡಿಸಿ ಏಳಬೇಕಿದೆ 
ಇಚ್ಛೆಯ ಬತ್ತಿಯ ಹಿಡಿದು,
ನಿಷ್ಠುರತೆಗಳ ಸುಡಬೇಕಿದೆ ಕರುಳ ಬಳ್ಳಿಯಿಂದ ಹಿಡಿದು

ಮತ್ತೆ ನಿಸ್ತೇಜವಾಗುತ್ತ ವೆ ಎಲ್ಲ ಭಾವಗಳು 
ಒರತೆಯ ಕೊರತೆಯಿಂದ,
ಉದಯಿಸಬೇಕು ಜ್ಞಾನಗಂಗೆ
ಹೊತ್ತಿಗೆ ಹೊತ್ತಿಗೆಯಿಂದ..

-ದೀಪಕ್

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.