ಶನಿವಾರ, ಸೆಪ್ಟೆಂಬರ್ 8, 2018

ಜಾಗೃತಿ, ಉರಗ ಸಂರಕ್ಷಣೆ ; ಹಾವು ಮಾನವನ ಸಂಘರ್ಷಕ್ಕೆ ಮುಕ್ತಿ

ಹಾವುಗಳನ್ನು ಸಂರಕ್ಷಿಸುವುದು ಅಪಾಯಕರವೇ? ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆಮಾಡುವುದು?
ಮಾನವ ಉರಗಗಳ ಸಂಘರ್ಷವನ್ನು ಹೇಗೆ ನಿವಾರಿಸಬಹುದು?

ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು , ಮುಂದಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿರುವೆ.  ಮಾನವ ಹಾಗೂ ಹಾವುಗಳ ಸಂಘರ್ಷ ಕೊನೆಮಾಡಲು ಯಾವಾಗಲೂ  ಹಾವುಗಳ ಸ್ಥಳಾಂತರ ಮಾಡುವುದು ಪರಿಹಾರವಲ್ಲ. ಪ್ರತಿ ಸಂದರ್ಭದಲ್ಲೂ ಯಾವುದಾದರೂ ಕಾರಣದಿಂದ ಸಂರಕ್ಷಣಾಕಾರ್ಯ ಕೈಗೊಳ್ಳ ಬೇಕಾಗುತ್ತದೆ . ಸಂರಕ್ಷಣೆಗೆ ಒಂದು ನಿಯಮ , ಸಂಶೋಧನೆ,ರೀತಿ ರಿವಾಜುಗಳನ್ನು ಅನುಸರಿಸಬೇಕು .ಅದರಲ್ಲಿ ಸಂರಕ್ಷಣೆ ಹಾಗೂ ಸುರಕ್ಷಿತವಾಗಿ ಹಾವುಗಳ ಬಿಡುಗಡೆ ಮುಖ್ಯ.  ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ  ಅವಶ್ಯಕತೆ ಇರುವಲ್ಲಿ ಮಾತ್ರ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತೇವೆ ಅದರಿಂದ  ಅನವಶ್ಯಕ ಕಾರ್ಯಾಚರಣೆ ತಪ್ಪುತ್ತದೆ .

ಶನಿವಾರ, ಸೆಪ್ಟೆಂಬರ್ 1, 2018

ಒಂಟಿ ಮಾತು

ಅನಿಸಿದ್ದನ್ನು
ಮಾತನಾಡಿ
ಕಳೆದುಕೊಳ್ಳಬೇಕು
ಇಲ್ಲದಿರೆ ಭೂತವಾಗಿ
ಕಾಡುತ್ತದೆ
ಗಂಡ ಹೆಂಡಿರ ನಡುವೆ
ಮಾತಿನ ಸರಾಗದ ವೇಗ
ಬೇರೆಯವರೊಡನೆ
ಬರದು
ಇಬ್ಬರರಿತು ಸ್ನೇಹಿತರಾದರೆ
ಸ್ವರ್ಗ-ಕೊಂದೆ ಗೇಣು
ಅದಕ್ಕೆ ಸಂಶಯವಿಲ್ಲ
ಬೇಕು ಜೊತೆಗಾರರು
ಜಗಳವಾಡಲು ಸರಿಯೇ
ಪ್ರೀತಿ ಇರಬೇಕಲ್ಲಿ

ಆಡದ ಮಾತು
ತಲೆಯೊಳಗೆ ಪ್ರತಿಫಲಿಸಿ
ಫಲಿಸಿ
ತನ್ನೊಡನೆ ನುಡಿದಾಗ
ಜಗ ಕರೆವುದದನು
ಹುಚ್ಚೆಂದು
ಮಾತನಾಡಲು ಬೇಕು
ಜೀವ ಸಂಗಾತಿ
ಇಲ್ಲದಿರೆ
ತನ್ನೊಳಗೇ ತಾ ನುಡಿದು ಉಲಿದು
ಆಗುವವರು ಅಂತರಮುಖಿ
ಅವರೊಡನಿಲ್ಲ ಸುಖಿ

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.