ಶನಿವಾರ, ಸೆಪ್ಟೆಂಬರ್ 8, 2018

ಜಾಗೃತಿ, ಉರಗ ಸಂರಕ್ಷಣೆ ; ಹಾವು ಮಾನವನ ಸಂಘರ್ಷಕ್ಕೆ ಮುಕ್ತಿ

ಹಾವುಗಳನ್ನು ಸಂರಕ್ಷಿಸುವುದು ಅಪಾಯಕರವೇ? ಹೌದೆಂದಾದರೆ ಅಪಾಯವನ್ನು ಹೇಗೆ ಕಡಿಮೆಮಾಡುವುದು?
ಮಾನವ ಉರಗಗಳ ಸಂಘರ್ಷವನ್ನು ಹೇಗೆ ನಿವಾರಿಸಬಹುದು?

ನನ್ನ ಅನುಭವದ ಹಿನ್ನೆಲೆಯಲ್ಲಿ ಈ ಮೇಲಿನ ಪ್ರಶ್ನೆಗಳನ್ನು , ಮುಂದಿನ ಸಾಲುಗಳಲ್ಲಿ ಉತ್ತರಿಸುವ ಪ್ರಯತ್ನ ಮಾಡಿರುವೆ.  ಮಾನವ ಹಾಗೂ ಹಾವುಗಳ ಸಂಘರ್ಷ ಕೊನೆಮಾಡಲು ಯಾವಾಗಲೂ  ಹಾವುಗಳ ಸ್ಥಳಾಂತರ ಮಾಡುವುದು ಪರಿಹಾರವಲ್ಲ. ಪ್ರತಿ ಸಂದರ್ಭದಲ್ಲೂ ಯಾವುದಾದರೂ ಕಾರಣದಿಂದ ಸಂರಕ್ಷಣಾಕಾರ್ಯ ಕೈಗೊಳ್ಳ ಬೇಕಾಗುತ್ತದೆ . ಸಂರಕ್ಷಣೆಗೆ ಒಂದು ನಿಯಮ , ಸಂಶೋಧನೆ,ರೀತಿ ರಿವಾಜುಗಳನ್ನು ಅನುಸರಿಸಬೇಕು .ಅದರಲ್ಲಿ ಸಂರಕ್ಷಣೆ ಹಾಗೂ ಸುರಕ್ಷಿತವಾಗಿ ಹಾವುಗಳ ಬಿಡುಗಡೆ ಮುಖ್ಯ.  ಹಾವುಗಳ ಬಗ್ಗೆ ಸರಿಯಾದ ತಿಳುವಳಿಕೆ ಇದ್ದರೆ  ಅವಶ್ಯಕತೆ ಇರುವಲ್ಲಿ ಮಾತ್ರ ಸಂರಕ್ಷಣಾ ಕಾರ್ಯವನ್ನು ಕೈಗೊಳ್ಳುತ್ತೇವೆ ಅದರಿಂದ  ಅನವಶ್ಯಕ ಕಾರ್ಯಾಚರಣೆ ತಪ್ಪುತ್ತದೆ .

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.