ಮಂಗಳವಾರ, ಮೇ 31, 2016

ದ್ವಂದ್ವ

ಮಾತು ಮುಗಿದ ನಂತರ
ಕಳೆದುಕೊಂಡ
ಅನುಭವ
ಕಾಲವಾದವೆಷ್ಟೊ ಬಂಧಗಳು
ಅನಂತದಲ್ಲಿ
ಸ್ವಂತಕೆಂದು ಕೊಂಡಿ ಬಿಚ್ಚಿದಾಗ ಸದ್ದೂ
ಸಡ್ಡು ಹೂಡೆದು
ಆಂತರ್ಯವ ಹಂಗಿಸುತ್ತದೆ;
"ನೀನೊಬ್ಬ ಸೋಗಿನ ಸ್ವಾರ್ಥಿ"

ನನ್ನೊಳಗಿನ್ನೊಬ್ಬನಿಗೆ ಸುಮ್ಮನಿರಲು
ಹೇಳಿದಷ್ಟು ಕಿರಿಕಿರಿ,
ಹುಚ್ಚಾಲೋಚನೆಗಳ ಹಿಂದೆ
ಓಡಿದರೆ  ಆತ್ಮಹತ್ಯೆ ಖಾತರಿ
ಕೇಳದಿರೆ
ಆತ್ಮದ ಸಾವು !

ದೀಪಕ್

ಕಾಮೆಂಟ್‌ಗಳಿಲ್ಲ:

ಬ್ಲಾಗ್ ಆರ್ಕೈವ್

Its blog I have created to enter my day to day search & feel like sharing the same with like minded people. I solicit a comment from all my friends.